ಸೋಮವಾರ, ಸೆಪ್ಟೆಂಬರ್ 6, 2010

ಆಸ್ತಿಕತೆಯೋ ನಾಸ್ತಿಕಾತೆಯೋ

ಆಸ್ತಿಕತೆಯೋ ನಾಸ್ತಿಕಾತೆಯೋ


ಒಂದು ಶನಿವಾರ ಹನುಮ ದೇವರ ದರ್ಶನ ಮಾಡಲು ನುಗ್ಗೀಕೇರಿ ಹನುಮ ದೇವರ ಗುಡಿಗೆ ಹೋಗಿದ್ದೆ. ದರ್ಶನ ಮುಗಿಸಿ ಇನ್ನೇನು ಹೊರಡಬೇಕು ಎನ್ನುವಷ್ಟ್ರಲ್ಲಿ ಒಬ್ಬ ಮಧ್ಯ ವಯಸ್ಸಿನ ಹೆಣ್ಣು ಮಗಳು ಬಂದು ಒಂದು ಪ್ರಿಂಟ್ ಮಾಡಿದ ಕಾಗದವನ್ನು ಕೈಗೆ ಕೊಟ್ಟಳು. ನಾನು ಏನು ಎಂದು ತೆಗೆದು ನೋಡಿವಷ್ಟರಲ್ಲಿ ಆ ಮಹಿಳೆ ಅಲ್ಲಿರಲಿಲ್ಲ. ನಾನು ನಿಧಾನವಾಗಿ ಆ ಮಹಿಳೆ ಕೊಟ್ಟ ಕಾಗದವನ್ನು ತೆಗೆದು ನೋಡಿದೆ, ಅದು ಮುದ್ರಿಸಿದ ಹನುಮಾನ್ ಚಾಲೀಸ್ ಮಂತ್ರ ಆಗಿತ್ತು. ನಾನು ಖುಶಿಯಿಂದ ಓದುತ್ತಾ ಹೋದೆ. ಕೊನೆಗೆ ಅದರಲ್ಲಿಯ ಕೊನೆಯ ಸಾಲು ನನ್ನನ್ನು ಸಂಕಷ್ಟಕ್ಕೆ ಈಡು ಮಾಡಿತ್ತು. ಅದರಲ್ಲಿಯ ಒಕ್ಕಣೆ ಹೀಗಿತ್ತು., ಇದನ್ನು ಓದಿ ಎಲ್ಲಿ ಬೇಕಾದಲ್ಲಿ ಎಸೆಯಬೇಡಿರಿ, ಇದನ್ನು ಓದಿ ನಂತರ ನೀವು ಸಹ ಇದೆ ತರಹದ ೧೦೦ ಪ್ರತಿಗಳನ್ನು ಮಾಡಿ ಹಂಚಬೇಕು, ಇದನ್ನು ನಿರ್ಲಕ್ಷಿಸಬೇಡಿ, ನಿರ್ಲಕ್ಷಿಸಿದರೆ ನಿಮಗೆ ಆಪತ್ತು ಬರಬಹುದು ಎಚ್ಚರ. ಇದರ ಜೊತೆಗೆನೆ ಇದನ್ನು ನಿರ್ಲಕ್ಷಿಸಿ ತೊಂದರೆಗೊಳಗದವರ ಅನುಭವವನ್ನು ಕೊಟ್ಟಿದ್ದರು.

ಈಗ ಹೇಳಿ ಇದು ನಿಜವೋ ಅಥವಾ ಪ್ರಿಂಟಿಂಗ್ ಪ್ರೆಸ್ ನವರ ಮಾರ್ಕೆಟಿಂಗ್ ತಂತ್ರವೋ.